ದಾವಣಗೆರೆ ಆಂಜನೇಯ ಬಡಾವಣೆ, 15ನೇ ಕ್ರಾಸ್, ಡೋರ್ ನಂ. 5109/ಎ ವಾಸಿ, ಮೆಳ್ಳೇಕಟ್ಟೆ ದಿ|| ಗೌಡ್ರ ಬಸಪ್ಪನವರ ಪುತ್ರರಾದ ಸಿವಿಲ್ ಇಂಜಿನಿಯರ್ ಶ್ರೀ ಜಿ. ಬಿ. ಸಿದ್ದಪ್ಪ ಅವರು ದಿನಾಂಕ 04.07.2023ರ ಮಂಗಳವಾರ ರಾತ್ರಿ 10.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 61 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಓರ್ವ ಸಹೋದರ, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಿನಾಂಕ 05.07.2023ರ ಬುಧವಾರ ಬೆಳಿಗ್ಗೆ 10 ಗಂಟೆಯವರೆಗೆ ದಾವಣಗೆರೆ ಸಿಟಿ ಆಂಜನೇಯ ಬಡಾವಣೆ, 15ನೇ ಕ್ರಾಸ್ನಲ್ಲಿರುವ (# 5109/ಎ) ಮೃತರ ಸ್ವಗೃಹದಲ್ಲಿ ಸಾರ್ವನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಂತರ ಮಧ್ಯಾಹ್ನ 1.30 ಗಂಟೆಗೆ ಮೃತರ ಸ್ವಗ್ರಾಮ ದಾವಣಗೆರೆ ತಾಲ್ಲೂಕು ಮೆಳ್ಳೇಕಟ್ಟೆ ಗ್ರಾಮದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಜಿ.ಬಿ. ಸಿದ್ದಪ್ಪ
![siddapppa ಜಿ.ಬಿ. ಸಿದ್ದಪ್ಪ](https://janathavani.com/wp-content/uploads/2023/07/siddapppa.jpg)