ಕಪಾಳಕ್ಕೆ ಬಾರಿಸಿದರೂ ಗಂಡಿನ ಮೌನ …!

ಕೊರೊನಾ ಲಸಿಕೆ ಪಡೆಯಬೇಕಾದವರ ಪಟ್ಟಿಯನ್ನು ರಚಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಮಹಿಳೆಯರಿಗೆ ಹೋಲಿಸಿದರೆ ಕೊರೊನಾದಿಂದ ಸಾಯುವ ಪುರುಷರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಕೊರೊನಾ ಸಾವಿನಲ್ಲಿ ಶೇ.70ರಷ್ಟು ಪಾಲು ಪುರುಷರದ್ದೇ ಆಗಿದೆ. ಇಷ್ಟಾದರೂ, ಲಸಿಕೆ ಪಡೆಯುವ ನಿರ್ದಿಷ್ಟ ವರ್ಗದವರನ್ನು ಗುರುತಿಸುವಾಗ ಪುರುಷರಿಗೆ ಆದ್ಯತೆ ನೀಡುವಂತೆ ಯಾವೊಬ್ಬ ಪರಿಣಿತ ಸಹ ಉಸಿರೆತ್ತಿಲ್ಲ.

ಕೇಂದ್ರ ಸರ್ಕಾರ ಈ ಹಿಂದೆ 2018ರಲ್ಲಿ ಅತ್ಯಾಚಾರದ ವಿರುದ್ಧ ಕಠಿಣ ಶಿಕ್ಷೆಗಾಗಿ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಯಲ್ಲೂ ಸಹ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಾಗ ಹೆಚ್ಚು ಶಿಕ್ಷೆ, ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ನಡೆದಾಗ ಕಡಿಮೆ ಶಿಕ್ಷೆಯ ಅಂಶವಿತ್ತು. ಅತ್ಯಾಚಾರದಂತಹ ದೌರ್ಜನ್ಯದ ವಿಷಯದಲ್ಲಾದರೂ ಲಿಂಗ ಸಮಾನತೆ ಇರಲಿ ಎಂಬ ಕೂಗಿಗೆ ಸಂಸತ್ತು ಕಿವಿಗೊಡುತ್ತಿಲ್ಲ.

ಇದಕ್ಕೆಲ್ಲ ಪ್ರಮಖ ಕಾರಣ ಎಂದರೆ ಪುರುಷರ ಪರ ಮಾತನಾಡುವುದು ಫ್ಯಾಷನ್ ಆಗಿಲ್ಲ. ಗಂಡಸರು ಮೊದಲೇ ಸಂಘಟಿತರಾಗಿಲ್ಲ. ಜಾತಿ, ಜನಾಂಗ, ಸಮುದಾಯ, ಇತ್ಯಾದಿಗಳ ಆಧಾರದ ಮೇಲೆ ನೂರೆಂಟು ಸಂಘಟನೆಗಳಿವೆ. ಆದರೆ, ಪುರುಷರಿಗೆ ಸಂಘಟನೆಗಳೇ ಇಲ್ಲ ಎನ್ನಬಹುದು. ಸಂಘಟನೆಯೇ ಇಲ್ಲ ಎಂದ ಮೇಲೆ ವೋಟ್ ಬ್ಯಾಂಕ್ ಇಲ್ಲ. ವೋಟ್ ಬ್ಯಾಂಕ್ ಇಲ್ಲ ಎಂದ ಮೇಲೆ ಪುರುಷ ಆಯೋಗವೂ ಇಲ್ಲ. ಇದ್ಯಾವೂ ಇಲ್ಲದಿರುವಾಗ ಪುರುಷರ ಬಗ್ಗೆ ವಿಚಾರ ಮಾಡಬೇಕು ಎಂಬ ಯೋಚನೆಯಾದರೂ ಆಡಳಿತಾರೂಢರಿಗೆ ಹೇಗೆ ಬರಬೇಕು?


ಎಸ್.ಎ. ಶ್ರೀನಿವಾಸ್‌
[email protected]

 

error: Content is protected !!