ಗುಬ್ಬಿ – `ಎ ಸ್ಮಾಲ್‌ ಬರ್ಡ್‌’

ಗುಬ್ಬಿಯ ಮೇಲೆ ಅನೇಕ ಗಾದೆ ಮಾತುಗಳು ಉದಾಹರಣೆಗೆ “ಗುಬ್ಬಿ ಎಣ್ಣೆ ಕುಡಿದರೆ, ಬೀಸುವ ಕಲ್ಲು ತೋಯಿಸೀತೆ”, “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ”, “ಹಾರುವ ಗುಬ್ಬಿಯ ಕಾಲಿಗೆ ಗೋಧಿಯ ಹುಲ್ಲು ಕಟ್ಟಿದ ಹಾಗೆ”. ಹಿರಿಯರು ಮಕ್ಕಳೊಂದಿಗೆ ಮಾಡುತ್ತಿದ್ದ “ಕಾಗೆ- ಗುಬ್ಬಿ ಎಂಜಲಿನ ಹಣ್ಣುಗಳ ರುಚಿ ಸವಿದವರೇ ಬಲ್ಲರು ಅದರ ರುಚಿ.

ಹಿಂದೆ ಕೊಡೇಕಲ್ ಬಸವೇಶ್ವರರ ಸಂಪ್ರದಾಯದವರು `ಸುವ್ವೀ ಬಾ ಸಂಗಯ್ಯಾ, ಸುವ್ವಿ ಬಾ ಲಿಂಗಯ್ಯಾ, ಸುವ್ವೀ ಬಾ ಚನ್ನಬಸವಣ್ಣ ಸುವ್ವಿ…’ ಎಂದು ಛತ್ರಿಯನ್ನು ಹಿಡಿದು ಓಣಿ ತುಂಬಾ ಹಾಡುತ್ತಾ, ಕೂಡಲ ಸಂಗಮನಾಥನ ಗುಡಿಯ ಕಳಸದ ಮೇಲೆ ಕುಳಿತು ಗುಬ್ಬಿ ನೀರು ಕುಡಿಯುವ ಕಾಲ ಬರುತೈತೆ ಎಂದಾಗ ನಕ್ಕ ಜನರು, ಇಂದು ಮಳೆಗಾಲದಲ್ಲಿ ಮಂಟಪ ಮುಳುಗಡೆಯಾದಾಗ, ಗುಬ್ಬಿ ನೀರು ಕುಡಿಯುತ್ತಿರುವುದನ್ನು ಕಂಡು, ಬೆಚ್ಚಿ ಬೀಳುತ್ತಿದ್ದಾರೆ.

ಇಂತಹ ಗುಬ್ಬಿಗಳಿಗೆ ಕೇಳಬೇಕಾಗಿದೆ? ಗುಬ್ಬಿಯ ಸಂತತಿಯೇ, ಎಲ್ಲಿ ಮರೆಯಾದಿರಿ, ಏಕೆ ದೂರಾದಿರೀ, ಮನೆಯನು ಮರೆತು ಎಲ್ಲಿಗೆ ಹೋದಿರಿ… ನಮ್ಮ ಮನಗಳ ತೊರೆದು ಎಲ್ಲಿಗೆ ಹಾರಿದಿರಿ ಎಂದು.

ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕಿಂತ ಕೀಳು, ಉಪಕಾರವ ಮಾಡಲಾರ, “ಬದುಕಿದರೆ ಸೈರಿಸಲಾರ”, ಮನುಷ್ಯನ ಅತೀ ಆಸೆಗೆ ನದಿ, ಗುಡ್ಡ, ಬೆಟ್ಟ, ಪಶು, ಪಕ್ಷಿ, ಪ್ರಾಣಿ ಸಂಕುಲಗಳು ಬಲಿಯಾಗುತ್ತಲಿರುವುದು ದುರಂತ. ಪ್ರಕೃತಿಯ ಮೇಲೆ ಮನುಷ್ಯ ನಡೆಸುತ್ತಿರುವ ದುರಂತದ ಫಲವೇ ಸುನಾಮಿ, ಭೂಕಂಪ, ಚಂಡಮಾರುತ ಇತ್ಯಾದಿ ಹಾಗೂ ಆಹಾರ ಅರಸುತ್ತಾ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು.

12ನೇ ಶತಮಾನದಲ್ಲಿಯೇ ಶರಣರು ನುಡಿದಿದ್ದರು “ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ಎಂದು”Earth has Created for all life, not just for human life” ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ, ಆ ಹಕ್ಕನ್ನು ಕಸಿದುಕೊಂಡರೆ, ಅದರ ಫಲವನ್ನು ಮುಂದೆ ಉಣ್ಣುವವರು ನಾವೇ…


ಎಂ.ಕೆ. ಬಕ್ಕಪ್ಪ, ದಾವಣಗೆರೆ.

error: Content is protected !!