ಸಿನಿಮಾ ಸಿರಿಯಿಂದ ಸಂಗೀತ ಸಾಮ್ರಾಟನಿಗೆ ಶ್ರದ್ಧಾಂಜಲಿ

ದಾವಣಗೆರೆ, ಸೆ.28- ನಗರದ ಸಿನಿಮಾ ಸಿರಿ ವತಿಯಿಂದ ಸಂಗೀತ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್‌.ಪಿ. ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಟಿ.ಎಂ. ಪಂಚಾ ಕ್ಷರಯ್ಯ, ಕಾರ್ಯದರ್ಶಿ ಎಂ.ಜಿ. ಜಗದೀಶ್‌, ಸುರಭಿ ಎಸ್.ಶಿವ ಮೂರ್ತಿ, ಸಾಲಿಗ್ರಾಮ ಗಣೇಶ್‌ ಶೆಣೈ, ಹೆಚ್‌.ವಿ.ಮಂಜುನಾಥ ಸ್ವಾಮಿ, ಈಶ್ವರಿ ಶಿವಕುಮಾರ್, ಗಾಂಧಿ ಮ್ಯೂಸಿಕ್ ಮಲ್ಲಿಕಾರ್ಜುನ್, ಕಣ್‌ಕುಪ್ಪಿ ಮುರುಗೇಶಪ್ಪ, ನಾಗರಾಜ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!