ದಲಿತ ಯುವಕನ ಹತ್ಯೆ : ಖಂಡನೆ

ಜಗಳೂರು, ಆ.28- ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಇಂಗಳಗಿ ಗ್ರಾಮದ ದಲಿತ ಯುವಕನ ಹತ್ಯೆ ಖಂಡಿಸಿ ಮತ್ತು ಆರೋಪಿಯನ್ನು  ಬಂಧಿಸುವಂತೆ ಒತ್ತಾಯಿಸಿ, ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಮುಖಂಡರು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. 

ಜಿಲ್ಲಾ ಕೆಎಂಎಸ್ ಅಧ್ಯಕ್ಷ ಬೇತೂರು ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಆನಂದಪ್ಪ, ಮುಖಂಡರಾದ ಪೂಜಾರಿ ಸಿದ್ದಪ್ಪ, ಚಂದ್ರಪ್ಪ, ರಂಗಸ್ವಾಮಿ, ವಕೀಲರಾದ ಮಹಾಂತೇಶ್, ಗೌರಿಪುರ ಸತ್ಯಮೂರ್ತಿ, ಹನುಮಂತಪ್ಪ,  ತಿಮ್ಮೇಶ್ ಮತ್ತಿತರರು ಭಾಗವಹಿಸಿದ್ದರು.

error: Content is protected !!