ಪ್ರಯಾಣಿಕರಿಗಾಗಿ ಕಾಯುತ್ತಿರುವ ಒಂದೇ ಖಾಸಗಿ ಬಸ್

ಹೊನ್ನಾಳಿ, ಆ.27- ಹೊನ್ನಾಳಿಯಿಂದ  ನ್ಯಾಮತಿ  ಮಾರ್ಗವಾಗಿ ಶಿವಮೊಗ್ಗ ಗ್ರಾಮಕ್ಕೆ ಮಹೇಶ್ವರಿ ಎಂಬ ಒಂದೇ ಖಾಸಗಿ ಬಸ್ ಮಾತ್ರ ಸಂಚಾರಕ್ಕೆ ಗುರುವಾರ ಬೆಳಿಗ್ಗೆ 7 ಕ್ಕೆ ಬಸ್ ನಿಲ್ದಾಣಕ್ಕೆ ಬಂದು ನಿಂತಿರುವುದು.

ಕಳೆದ ಕೆಲ ತಿಂಗಳ ನಂತರ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ನಿಲ್ಲಿಸಲಾಗಿದ್ದ ಬಸ್‍ನ ಚಾಲಕ ಮಂಜುನಾಥ ಗೌಡ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ 3 ದಿನಗಳಿಂದ ದಿನಕ್ಕೆ 3 ಟ್ರಿಪ್ ಮಾತ್ರ ಓಡಿಸುತ್ತಿದ್ದು ಪ್ರಯಾಣಿಕರು ಸರಿಯಾಗಿ ಬರದೆ ನಷ್ಟವಾದರೂ ಬಸ್ ಸಂಚಾರ ನಡೆಸುತ್ತಿರುವುದಾಗಿ  ತಿಳಿಸಿದ್ದಾರೆ.

error: Content is protected !!