ಡಿಕೆಶಿ ಗುಣಮುಖರಾಗಲೆಂದು ಪ್ರಾರ್ಥಿಸಿ ಎನ್‌ಎಸ್‌ಯುಐ ಪೂಜೆ

ಹರಿಹರ, ಆ.27-  ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶೀಘ್ರವೇ ಗುಣಮುಖರಾಗಿ ಬಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳು ವಂತಾಗಲಿ ಎಂದು ಎನ್.ಎಸ್.ಯು.ಐ. ಪ್ರಧಾನ ಕಾರ್ಯದರ್ಶಿ ಯತಿರಾಜ್ ರಾಮಪ್ಪ ಹೇಳಿದರು.

ಎನ್.ಎಸ್.ಯು.ಐ ವತಿಯಿಂದ ನಗರದ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನ, ದರ್ಗಾ ಮತ್ತು ಆರೋಗ್ಯ ಮಾತೆ ಚರ್ಚ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರು ಕೊರೊನಾದಿಂದ ಶೀಘ್ರವೇ ಗುಣಮುಖರಾಗಲಿ  ಎಂದು ವಿಶೇಷ ಪೂಜೆ ಸಲ್ಲಿಸಿ, ಪರ್ತಕರ್ತರೊಂದಿಗೆ ಮಾತನಾಡಿದರು. 

ಈ ಸಂದರ್ಭದಲ್ಲಿ ಎನ್. ಎಸ್. ಯು.ಐ. ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಸಂಜಯ್, ಪದ್ಮರಾಜ್, ತಾಹಿರ್, ಆಫ್ತಾಬ್, ಆಫಲಾನ್, ತನ್ವೀರ್, ರಜಾಕ್, ಮಾರು ಇನ್ನಿತರರಿದ್ದರು.

error: Content is protected !!