ಬೆಳ್ಳೂಡಿಯಲ್ಲಿ ವನಮಹೋತ್ಸವ

ಮಲೇಬೆನ್ನೂರು, ಆ.19- ಬೆಳ್ಳೂಡಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಸ್. ರಾಮಪ್ಪ ಸಸಿ ನೆಟ್ಟು ನೀರೆರೆದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಎಂ. ನರೇಂದ್ರ, ಮುಖಂಡರಾದ ಪೂಜಾರ್ ತಿಪ್ಪಣ್ಣ, ಮಾಳ್ಗಿ ಕೆಂಚಪ್ಪ, ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ರಾಮಚಂದ್ರಪ್ಪ, ಸಂತೋಷ್, ಕೃಷ್ಣಮೂರ್ತಿ, ರೇವಣಸಿದ್ದಪ್ಪ ಮತ್ತು ಪಿಡಿಓ ಬಿರಾದಾರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!