ಮೆಕ್ಕೆಜೋಳ ಹೊಲಕ್ಕೆ ಕರಡಿ ಹಿಂಡು ದಾಳಿ

ಹರಪನಹಳ್ಳಿ, ಆ.19- ಕರಡಿ ಹಿಂಡು ಮೆಕ್ಕೆಜೋಳದ ಹೊಲಕ್ಕೆ ನುಗ್ಗಿ  ಬೆಳೆ ನಾಶ ಮಾಡಿರುವ ಘಟನೆ ತಾಲ್ಲೂಕಿನ  ಹಾರಕನಾಳು ದೊಡ್ಡತಾಂಡ ಗ್ರಾಮದಲ್ಲಿ ಜರುಗಿದೆ.  ಹಾನಿಗೊಳಗಾದ  ಹಾರಕನಾಳು ದೊಡ್ಡತಾಂಡದ ರೈತ ಮೇಘಾ ನಾಯ್ಕ. ಮತ್ತು ವೆಂಕಟೇಶನಾಯ್ಕ ಎಂಬುವವರಿಗೆ ಸೇರಿದ  ಸುಮಾರು ಹತ್ತು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಹೊಲವನ್ನು ಕರಡಿ ಹಿಂಡು  ನಾಶ ಮಾಡಿವೆ. ಹುಲಸಾಗಿ ಬೆಳೆದು ನಿಂತ  ಜೋಳಕ್ಕೆ ಕರಡಿಗಳದಾಳಿ ಮಾಡಿ ಲಕ್ಷಂತರ ಬೆಳೆಯನ್ನು  ನಷ್ಟ ಉಂಟುಮಾಡಿದೆ.

ಹೊಲಕ್ಕೆ ಅರಣ್ಯ ಇಲಾಖೆಯ ಮಂಜುನಾಥ ಬಿಡನಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಹಾರ ಹರಸಿ  ವನ್ಯ ಜೀವಿಗಳು ಕಾಡಿನಿಂದ  ಹೊಲಗದ್ದೆಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಹಾನಿಗೊಳಗಾದ ರೈತನಿಗೆ ಪರಿಹಾರ ಕೊಡಿಸುವುದಾಗಿ ತಿಳಿಸಿದರು.

error: Content is protected !!