ಹರಪನಹಳ್ಳಿ : ಒಳಚರಂಡಿ ಅವ್ಯವಸ್ಥೆ ಖಂಡಿಸಿ ಎಐವೈಎಫ್ ಪ್ರತಿಭಟನೆ

ಹರಪನಹಳ್ಳಿ, ಆ.17- ಪಟ್ಟಣದಲ್ಲಿ ಒಳಚರಂಡಿ ಅವ್ಯವಸ್ಥೆ  ಸರಿಪಡಿಸು ವಂತೆ ಆಗ್ರಹಿಸಿ, ಅಖಿಲ ಭಾರತ ಯುವ ಜನ ಫೆಡರೇಷನ್ (ಎಐವೈಎಫ್) ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪುರಸಭಾ ಮುಖ್ಯಾಧಿ ಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು. 

ಪಟ್ಟಣದ 4ನೇ ವಾರ್ಡ್‌ನಲ್ಲಿ ಅನಧಿಕೃತ ಯುಜಿಡಿ ಬಳಕೆಯಿಂದಾಗಿ ಉಂಟಾಗಿರುವ ಸಮಸ್ಯೆಗೆ  ಕೂಡಲೇ ಅಧಿಕಾರಿಗಳು ಭೇಟಿ ನೀಡಿ, ಶಾಶ್ವತ ಪರಿಹಾರ ನೀಡಬೇಕು. ರಸ್ತೆಗಿಂತ ಮೇಲ್ಮಟ್ಟದಲ್ಲಿರುವ ಒಳಚರಂಡಿ  ಛೇಂಬರ್‌ಗ ಳನ್ನು ಹಾಗೂ ಜನರ ಆಹುತಿಗೆ ಬಾಯಿ ತೆರೆದು ನಿಂತಿರುವ ಛೇಂಬರ್‌ಗಳನ್ನು ಕೂಡಲೇ ಸರಿಪಡಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ರಾಜ್ಯ ಕಾರ್ಯದರ್ಶಿ ಕಾಂ. ಹೆಚ್.ಎಂ.ಸಂತೋಷ್, ರಮೇಶ್‌ನಾಯ್ಕ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಮುಜೀಬ್‌ ರೆಹಮಾನ್, ತಾಲ್ಲೂಕು ಉಪಾಧ್ಯಕ್ಷ ಕಾಶಿನಾಥ್‌, ಯಾಷಿನ್, ಕೆ.ಎಂ.ಉಮ್ಮಾರ್‌ಸಾಬ್, ಕೆ. ಆಲಂಸಾಬ್, ಹೆಚ್.ದಾವುದ್‌ಸಾಬ್, ಅಕ್ಬರ್‌ಸಾಬ್, ಪ್ಯಾರೀಮಾಬೀ, ತಾಹೇರಾಬೀ,
ಕೆ. ಸಲೀಂ ಇತರರು ಪಾಲ್ಗೊಂಡಿದ್ದರು.

error: Content is protected !!