ಹಾನಗಲ್ಲ ಶ್ರೀ ಶಿವಕುಮಾರ ಶಿವಯೋಗಿಗಳ ಸಾಕ್ಷ್ಯಚಿತ್ರ ಬಿಡುಗಡೆ

ರಾಣೇಬೆನ್ನೂರು, ಆ.17- ಅಕ್ಕಿಆಲೂರ ವಿರಕ್ತ ಮಠದ ಶ್ರೀ ಚನ್ನವೀರೇಶ್ವರ ಸ್ವಾಮೀಜಿ ಹಾಗೂ ನಂಜನಗೂಡಿನ ನಂಜುಂಡೇಶ್ವರ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಹಾನಗಲ್ಲ ಶ್ರೀ ಶಿವಕುಮಾರ ಶಿವಯೋಗಿಗಳ ಸಾಕ್ಷಚಿತ್ರದ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಶಿವಯೋಗಿಗಳ ಜನ್ಮಭೂಮಿ ರಾಣೇಬೆನ್ನೂರು ತಾಲ್ಲೂಕಿನ ಜೋಯಿಸರಹರಳಹಳ್ಳಿಯಲ್ಲಿ ಅನಾವರಣಗೊಂಡ ಸಾಕ್ಷ್ಯಚಿತ್ರದ ಪರಿಕಲ್ಪನೆ ಶ್ರೀ ಕಂಠ ಚೌಕಿಮಠ ಅವರದಾಗಿದ್ದು, ನವದೆಹಲಿಯ ಶ್ರೀ ಕುಮಾರ ಶಿವಯೋಗಿಗಳ ಸೇವಾ ಸಮಿತಿ ನಿರ್ಮಾಣ ಮಾಡಿದೆ.

ಗ್ರಾಪಂ ಅಧ್ಯಕ್ಷ ಡಿ.ಎಸ್. ಪಾಟೀಲ, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ, ಬಸಯ್ಯ ಹಾದರಗೇರಿ, ನಾಗನಗೌಡ ಪಾಟೀಲ, ಪ್ರವೀಣ ಮಳೆಮಠ, ನಾಗನಗೌಡ ಚೌಕಕ್ಕಳವರ ಭಾಗವಹಿಸಿದ್ದರು.  

error: Content is protected !!