ಚುನಾವಣಾ ಕಾರ್ಯ ಯಶಸ್ವಿಗೆ ಸಲಹೆ

ಹರಪನಹಳ್ಳಿ, ಡಿ.17- ಇಲ್ಲಿನ ತಾಲ್ಲೂಕು ಕಚೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಚುನಾವಣಾ ಕಾರ್ಯ ಬರೀ ಕಂದಾಯ ಇಲಾಖೆಗೆ ಸೀಮಿತವಲ್ಲ. ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಪರಸ್ಪರ ಕೈಜೋಡಿಸಿ, ಸಹಕಾರ ನೀಡಿ ಯಶಸ್ವಿಗೊಳಿಸಬೇಕು. ತಮಗೆ ನಿರ್ದೇಶನ ನೀಡಿದ ಕಾರ್ಯವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯತನ ಹಾಗೂ ವಿಳಂಬಕ್ಕೆ ಅವಕಾಶ ಇರುವುದಿಲ್ಲವೆಂದು ಸಹಾಯಕ ಆಯುಕ್ತ ಪ್ರಸನ್ನಕುಮಾರ್ ಅವರು ಸಲಹೆ ನೀಡಿದರು.  

ಸಭೆಯಲ್ಲಿ ತಹಶೀಲ್ದಾರ್ ಜಿ.ಅನಿಲ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಾಬು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ  ಟಿ.ಎಸ್.ಗಿರೀಶ್, ಎಎಸ್ಐ ನಾಗರತ್ನಮ್ಮ, ಸೆಕ್ಟರಲ್ ಅಧಿಕಾರಿಗಳು, ಎಇ ಜೆಸ್ಕಾಂ ಹಾಗೂ ಇತರೆ ಸಿಬ್ಬಂದಿ ಹಾಜರಿದ್ದರು.

error: Content is protected !!