ರಾಣೇಬೆನ್ನೂರು, ಡಿ.16- ಆರ್ಎಸ್ಎಸ್ ಮೇಲೆ ಇಲ್ಲದ ಆರೋಪ ಮಾಡಿ ನಗರದಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್ನ ಈಶ್ವರ ಹಾವನೂರ, ಸು. ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಪ್ರಕಾಶ ಬುರಡಿಕಟ್ಟಿ, ದೀಪಕ್ ಹರಪನಹಳ್ಳಿ, ಚೋಳಪ್ಪ ಕಸವಾಳ, ಬಸವರಾಜ ಕೇಲಗಾರ, ಸಿ.ಎಸ್. ಕುಲಕರ್ಣಿ ಇನ್ನಿತರರಿದ್ದರು.
July 25, 2024