ಕನ್ನಡ ಸಾಧಕರಿಗೆ ಬಿಎಸ್‌ಸಿ ಸನ್ಮಾನ

ದಾವಣಗೆರೆ, ಡಿ.5- ಬಿ.ಎಸ್‌. ಚನ್ನಬಸಪ್ಪ ಅಂಡ್‌ ಸನ್ಸ್‌ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್‌,   ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಜಸ್ಟಿನ್ ಡಿ’ಸೌಜ,   ಛಾಯಾಗ್ರಾಹಕ ವಿವೇಕ್,  ಸಮಾನ ಮನಸ್ಕರ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್‌ ಸತ್ತಾರ್ ಸಾಬ್‌ ಅವರುಗಳನ್ನು ಬಿ.ಎಸ್. ಚನ್ನಬಸಪ್ಪ ಅಂಡ್‌ ಸನ್ಸ್‌ನ ಶಾಖೆಯಾದ ಬಿ.ಎಸ್‌.ಸಿ. ಎಕ್ಸ್‌ಕ್ಲೂಸಿವ್ ಶೋರೂಂ ಮಳಿಗೆಯ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಎಸ್‌. ಚನ್ನಬಸಪ್ಪ ಅಂಡ್‌ ಸನ್ಸ್‌ ಮಾಲೀಕರಾದ ಬಿ.ಯು. ಚಂದ್ರಶೇಖರ್‌, ಶ್ರೀಮತಿ ಮಧು ಚಂದ್ರಶೇಖರ್‌, ಬಿ.ಸಿ. ವಿವೇಕ್  ಮತ್ತಿತರರು ಉಪಸ್ಥಿತರಿದ್ದರು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‌ ಶೆಣೈ ಕಾರ್ಯಕ್ರಮ ನಿರೂಪಿಸಿದರು.

error: Content is protected !!