ಶಾಲಾ ಮಕ್ಕಳಿಗೆ ಧಾನ್ಯ ವಿತರಣೆ

ಮಲೆಬೆನ್ನೂರು, ನ.21 – ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳಾದ ಅಕ್ಕಿ, ಗೋಧಿ, ಬೇಳೆಯನ್ನೂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ರಾಮಕೃಷ್ಣಪ್ಪ ವಿತರಿಸಿದರು. ಎಸ್‍ಡಿಎಂಸಿ ಅಧ್ಯಕ್ಷ ಎಸ್.ನಿಜಲಿಂಗಪ್ಪ, ಸದಸ್ಯರಾದ ಹುಚ್ಚೆಂಗೆಪ್ಪ, ಎ. ಬಸವರಾಜಪ್ಪ, ಶಿಕ್ಷಕರಾದ ಶರಣಕುಮಾರ್ ಹೆಗಡೆ, ಲೈಖಭಾನು, ಕೆ.ಮಂಗಳಾ, ಹೇಮಾ, ರಶ್ಮಿ ಮತ್ತಿತರರು ಹಾಜರಿದ್ದರು.

error: Content is protected !!