ಬಿಳಿನೊಣ ನಿಯಂತ್ರಣ ಕುರಿತು ಶಿಬಿರ

ಮಲೇಬೆನ್ನೂರು, ನ.21- ಕೆ.ಎನ್. ಹಳ್ಳಿ ಗ್ರಾಮದ ರೈತ ಶಿವರಾಜ್ ಅವರ ತೋಟದಲ್ಲಿ, ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯ ಸಮಗ್ರ ಬೇಸಾಯ ಪದ್ಧತಿ ಮತ್ತು ರುಗೋಸ್ ಬಿಳಿ ನೊಣ ನಿಯಂತ್ರಣ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ತೋಟಗಾರಿಕೆ ವಿಷಯ ತಜ್ಞ ಡಾ. ಎಂ.ಜಿ. ಬಸವನಗೌಡ ರೈತರಿಗೆ ಮಾಹಿತಿ ನೀಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ, ಪ್ರಗತಿಪರ ರೈತ ವೆಂಕಟರಾಮಾಂಜನೇಯ, ಹೊಳೆಸಿರಿಗೆರೆಯ ಕುಂದೂರು ಮಂಜಪ್ಪ, ಯಲವಟ್ಟಿ ಆಂಜನೇಯ, ಕೊಕ್ಕನೂರಿನ ನಿರಂಜನ್ ಪಾಟೀಲ್  ಮತ್ತಿತರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರೇಖಾ ಸ್ವಾಗತಿಸಿದರು.

error: Content is protected !!