ಜಗಳೂರಿನಲ್ಲಿ ವೀರಶೈವ ಸಮಾಜದಿಂದ ವಿಜಯೋತ್ಸವ

ಜಗಳೂರು, ನ.18- ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದನ್ನು ತಾಲ್ಲೂಕು ವೀರಶೈವ ಸಮಾಜ ಸ್ವಾಗತಿಸಿದ್ದು, ಸ್ಥಳೀಯ ಗಾಂಧಿ ವೃತ್ತದಲ್ಲಿ ವಿಜಯೋತ್ಸವವನ್ನು  ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಜೆ.ಎನ್. ಶಿವನಗೌಡ, ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ  ಬಹುದಿನಗಳ ಬೇಡಿಕೆಯಾಗಿದ್ದ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದಾರೆ. ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮುಖಂಡರಾದ ಎಮ್.ಎಸ್. ಪಾಟೀಲ್. ಸಿದ್ದೇಶ್, ರೇವಣ್ಣ,
ಎನ್.ಎಸ್.ರಾಜು, ಆರ್.ವಿ.ಎಸ್. ವೀರೇಶ್. ವೀರೇಂದ್ರ ಪಾಟೀಲ್. ಶಿವಕುಮಾರ ಸ್ವಾಮಿ, ರೇಖಾ, ವಾಣಿ ಹಾಗು ಇನ್ನಿತರರಿದ್ದರು.

error: Content is protected !!