ಮಲೇಬೆನ್ನೂರು, ನ. 14- ಕುಂಬಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಶನಿವಾರ ಸಂಘದ ಅಧ್ಯಕ್ಷ ಡಿ.ಕೆ. ಸ್ವಾಮಿ ಅವರು ಸಹಕಾರ ಧ್ವಜಾರೋಹಣ ನೆರವೇರಿಸಿದರು. ಸಂಘದ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ, ನಿರ್ದೇಶಕರಾದ ಕರಡಿ ಸೋಮಶೇಖರ್, ಬಿ.ಕೆ. ಹನುಮೇಶ್, ಎಂ. ವಾಸುದೇವಮೂರ್ತಿ, ಹಾಲಮ್ಮ, ಕೆ. ಕುಮಾರ, ಹಳೇಮನೆ ಆಂಜನೇಯ, ಆರ್. ವೀರಭದ್ರಪ್ಪ, ವಿರೂಪಾಕ್ಷಪ್ಪ, ಸಂಘದ ಸಿಇಓ ಯಶೋಧಮ್ಮ ಈ ವೇಳೆ ಹಾಜರಿದ್ದರು.
July 23, 2024