ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಣೆ

ದಾವಣಗೆರೆ, ಆ.9- ಕ್ವಿಟ್ ಇಂಡಿಯಾ ಚಳುವಳಿ ನೆನಪಿಗಾಗಿ ಭಾರತ ಸರ್ಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ, ಸ್ವಾತಂತ್ರ್ಯ ಹೋರಾಟಗಾರರಾದ ದಾವಣಗೆರೆ ತಾಲ್ಲೂಕಿನ ಬಿ.ಮರುಳಸಿದ್ದಪ್ಪ, ಬಿ.ಎನ್.ಶಿವಲಿಂಗ ಸ್ವಾಮಿ, ಹೆಚ್.ಮರುಳಸಿದ್ದಪ್ಪ, ಟಿ.ಸಿದ್ದರಾಮಪ್ಪ, ಡಿ.ಹಾಲಪ್ಪ ಅವರುಗಳನ್ನು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಇವರ ಜಂಟಿ ಆಶ್ರಯದಲ್ಲಿ ಅವರ ನಿವಾಸಗಳಿಗೆ ತೆರಳಿ, ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

error: Content is protected !!