ಕುಂಬಳೂರು ಹನುಮಪ್ಪನ ಕಾಣಿಕೆ ಹುಂಡಿಯಲ್ಲಿ 5.93 ಲಕ್ಷ ರೂ. ಸಂಗ್ರಹ

ಮಲೇಬೆನ್ನೂರು, ನ.11- ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಶನಿವಾರ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರ ಸಮ್ಮುಖದಲ್ಲಿ ಕಾಣಿಕೆ ಹುಂಡಿಯನ್ನು ತೆರೆದು ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು.

2 ವರ್ಷಗಳ ನಂತರ ಕಾಣಿಕೆ ಹುಂಡಿ ತೆರೆದಿದ್ದರಿಂದ 5,93,416 ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಹುಂಡಿ ಎಣಿಕೆ ನಂತರ ಉಪ ತಹಶೀಲ್ದಾರ್ ಆರ್.ರವಿ ತಿಳಿಸಿದರು. ಮುಜರಾಯಿ ಶಿರಸ್ತೇದಾರ್ ನಟರಾಜ್, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀಧರಮೂರ್ತಿ, ಸೌಮ್ಯ, ಸಂಗೀತಾ, ಆನಂದತೀರ್ಥ, ಸುಭಾನಿ, ಮಂಜುಳಾ, ಶಿಲ್ಪ, ದೇವರಾಜ್  ಮತ್ತಿತರರು ಕಾಣಿಕೆ ಹುಂಡಿ ಎಣಿಕೆಯಲ್ಲಿ ಭಾಗವಹಿಸಿದ್ದರು.

error: Content is protected !!