ರಾಣೇಬೆನ್ನೂರಿನಲ್ಲಿ ಧರ್ಮ ಯಜ್ಞ

ರಾಣೇಬೆನ್ನೂರಿನ ಗಂಗಾಪುರ ರಸ್ತೆಯಲ್ಲಿರುವ ಶ್ರೀ ಶನೈಶ್ಚರ ಮಂದಿರದಲ್ಲಿ ವಿಶ್ವದ ಸಂಕಷ್ಟ ನಿವಾರಣೆಗೆ ಇಂದಿನಿಂದ ಒಂದು ವರ್ಷ ಕಾಲ ವಿವಿಧ ಧಾರ್ಮಿಕ ಧರ್ಮ ಯಜ್ಞ  ಸೇರಿದಂತೆ,  ಪೂಜಾ ಕಾರ್ಯಗಳು ನಡೆಯಲಿವೆ ಎಂದು ಪೀಠಾಧಪತಿ ಶ್ರೀ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.    

ಪ್ರತಿದಿನ ಮೃತ್ಯುಂಜಯ ಜಪ, ಯಾಗ, ಶ್ರೀ ದುರ್ಗಾ ಜಪ, ಹವನ, ದೀಪದುರ್ಗಾ ನಮಸ್ಕಾರ ಮುಂತಾದ ಪೂಜಾ ಕಾರ್ಯಕ್ರಮಗಳು ಜರುಗಲಿವೆ.  ಎರಡು ಮಹಾಮಂಡಲ ಕಾಲ ಅಂದರೆ 384 ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮವು ಮುಂದಿನ ವರ್ಷದ  ತಿಲ ಲಕ್ಷದೀಪೋತ್ಸವದಂದು ಮಂಗಲವಾಗಲಿದೆ ಎಂದರು. 

ಇದೇ ವೇಳೆ ಶ್ರೀಗಳು ಕರಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಠದ ಭಕ್ತರಾದ ಎಸ್.ಎಸ್. ರಾಮಲಿಂಗಣ್ಣನವರ, ರವಿ ಪಾಟೀಲ, ಅಜೇಯ ಮಠದ, ಬಸವರಾಜ ಸವಣೂರ ಇನ್ನಿತರರಿದ್ದರು.  

error: Content is protected !!