ಜಗಳೂರು, ನ.10- ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಪ್ರಯುಕ್ತ ಪಕ್ಷದ ಕಾರ್ಯಕರ್ತರು ಇಲ್ಲಿನ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಆರ್. ತಿಪ್ಪೇ ಸ್ವಾಮಿ, ಸದಸ್ಯರಾದ ಪಾಪಲಿಂಗಪ್ಪ, ರುದ್ರಮುನಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿವಿ.ನಾಗಪ್ಪ, ಮುಖಂಡರಾದ ಜೆ.ವಿ. ನಾಗರಾಜ್, ಮಾಗಡಿ ಮಂಜಣ್ಣ, ಬಿಸ್ತುವಳ್ಳಿ ಬಾಬು, ಕಾಂತರಾಜ್, ಇಂದ್ರೇಶ್, ಕೆ.ಎಸ್.ಪ್ರಭು, ಜೆ.ಸಿ. ಓಬಣ್ಣ, ಓಬಳೇಶ್, ಹುಲಿಕುಂಟಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
March 10, 2025