ನೀರು ಸರಬರಾಜು ಸಹಾಯಕರಿಗೆ ಬೀಳ್ಕೊಡುಗೆ

ಹರಪನಹಳ್ಳಿ, ಜು.31- ವಯೋ ನಿವೃತ್ತಿ ಹೊಂದಿದ ಪುರಸಭೆಯ ನೀರು ಸರಬರಾಜು ಸಹಾಯಕ ಟಿ. ಕೊಟ್ರೇಶ್, ಕೆ. ಫಜುಲು ಅವರಿಗೆ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಹರಪನಹಳ್ಳಿ ಶಾಖೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜ್ ನಾಯ್ಕ್ ಮಾತನಾಡಿ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ಪಿ. ಮಂಜುನಾಥ್, ಕಚೇರಿ ವ್ಯವಸ್ಥಾಪಕ ಅಶೋಕ್, ಪ್ರಥಮ ದರ್ಜೆ ಸಹಾಯಕ ಸುರೇಶ್, ಸಮುದಾಯದ ಅಧಿಕಾರಿ ಸಿ. ಲೋಕ್ಯಾನಾಯ್ಕ, ಸಂಘದ ಅಧ್ಯಕ್ಷ ಹನುಮಂತಪ್ಪ, ಜಬೀ, ಹೆಚ್.ಕೆ. ಶಿವಪ್ಪ ಸೇರಿದಂತೆ ಇನ್ನಿತರರಿದ್ದರು.

error: Content is protected !!