ಪಶು ವೈದ್ಯಕೀಯ ಇಲಾಖೆಯಿಂದ ಪರಿಸರ ದಿನ

ದಾವಣಗೆರೆ, ಜು.31- ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆವತಿಯಿಂದ ವಿಶ್ವ ಪರಿಸರ ದಿನಾಚರಣೆಯಂದು ವನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರ್ ನಾಯ್ಕ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರ ಕಾಳಜಿ ನಿರಂತರವಾಗಿರಲಿ ಎಂದು ಆಶಿಸಿದರು.

ಸಹಾಯಕ ನಿರ್ದೇಶಕ ಡಾ. ವೀರೇಶ್, ಡಾ. ಚಿದಾನಂದಪ್ಪ, ಡಾ. ಚಂದ್ರಶೇಖರ್ ಸುಂಕದ್, ಡಾ. ನಾಗರಾಜ್, ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ಶಿವಕುಮಾರ್, ಡಾ. ರವಿ ಶಂಕರ್, ಡಾ. ಟಿ.ಎನ್. ಗಿರೀಶ್, ಡಾ. ಸತೀಶ್ ಮತ್ತು ಜಿ.ಟಿ. ಮಲ್ಲಪ್ಪ, ಹಾಲಸ್ವಾಮಿ, ಶೌಕತ್ ಅಲಿ ಮತ್ತು ಸಿಬ್ಬಂದಿ ವರ್ಗದವರು, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ  ಎನ್.ಕೆ. ಕೊಟ್ರೇಶ್ ಇನ್ನಿತರರಿದ್ದರು.

error: Content is protected !!