ಪಾಲಿಕೆ ವಿಪಕ್ಷ ಸದಸ್ಯರಿಂದ ಆವರಗೊಳ್ಳದ ಘನ ತ್ಯಾಜ್ಯ ಕಸ ವಿಲೇವಾರಿ ಘಟಕಕ್ಕೆ ಭೇಟಿ

ದಾವಣಗೆರೆ, ನ.3- ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕಸ ವಿಲೇವಾರಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ಮನಗಂಡು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಆವರಗೊಳ್ಳದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದ ಸದಸ್ಯರು, ನಗರದಲ್ಲಿ ಪ್ರತಿದಿನ 160 ರಿಂದ 165 ಟನ್ ಕಸ ಸಂಗ್ರಹವಾಗುತ್ತಿದ್ದು, ಆದರೆ ಕಳೆದ 15 ದಿನಗಳಿಂದ ಪ್ರತಿದಿನ ಕೇವಲ 120 ರಿಂದ 121 ಟನ್ ಕಸ ಸಂಗ್ರಹವಾಗುತ್ತಿದೆ. 

ಕಸ ಸರಿಯಾಗಿ ಸಂಗ್ರಹವಾಗದೆ ನಗರದ ಸ್ವಚ್ಛತೆ ಮತ್ತು ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಈ ಮಾಹಿತಿಯಿಂದ ತಿಳಿಯುತ್ತದೆ ಎಂದು ನಾಗರಾಜ್ ತಿಳಿಸಿದರು.

ಆವರಗೊಳ್ಳಕ್ಕೆ ಹೋಗುವ ರಸ್ತೆ ಕಾ ಮಗಾರಿ ನಡೆಯುತ್ತಿರು ವುದರಿಂದ ಭಾರೀ ವಾಹನಗಳ ಮೂಲಕ ಕಸ ಸಾಗಾಣಿಕೆಗೆ ತೊಂದರೆಯಾಗುತ್ತಿದ್ದು, ಟ್ರ್ಯಾಕ್ಟರ್‌ಗಳನ್ನು ಹೆಚ್ಚೆಚ್ಚು ಮಾಡಿ ಕಸ ವಿಲೇವಾರಿ ಮಾಡಬೇಕು ಎಂದು ಆಯುಕ್ತರಿಗೆ ತಿಳಿಸಿದರು. ಆರೋಗ್ಯ ಅಧಿಕಾರಿಗಳ ಸಭೆ ಕರೆದು ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಗಡಿ ಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್, ಜೆ.ಡಿ. ಪ್ರಕಾಶ್, ವಿನಾಯಕ, ಸೈಯದ್ ಚಾರ್ಲಿ,  ಕಾಂಗ್ರೆಸ್ ಮುಖಂಡ ಉಮೇಶ್ ಉಪಸ್ಥಿತರಿದ್ದರು.

error: Content is protected !!