ವಿನೋಬನಗರದಲ್ಲಿ ಕಸದ ರಾಶಿ ಸ್ವಚ್ಛ ಮಾಡಿಸಿದ ಎ.ನಾಗರಾಜ್

ದಾವಣಗೆರೆ, ನ.2- ವಿನೋಬನಗರದಲ್ಲಿ ಕಸದ ರಾಶಿ ಎಂದು ಪತ್ರಿಕೆ ಗಳಲ್ಲಿ ಪ್ರಕಟಗೊಂಡ ಸುದ್ದಿ ನೋಡಿದ ತಕ್ಷಣ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರು ಸ್ಥಳಕ್ಕೆ ಧಾವಿಸಿ, ಜೆಸಿಬಿ ಮೂಲಕ ಸ್ವಚ್ಛಗೊಳಿ ಸಿದರು. ಖಾಸಗಿ ನಿವೇಶನದಲ್ಲಿ ಕಸ ತುಂಬಿದ್ದು, ಅದನ್ನು ಸ್ವಚ್ಛ ಮಾಡಿಸಿ, ಜಾಗದ ಮಾಲೀಕರಿಗೆ ಪಾಲಿಕೆ ವತಿಯಿಂದ ನೋಟೀಸು ನೀಡಲಾಯಿತು.

ಈ ಜಾಗ ವಿನೋಬನಗರಕ್ಕೆ ಸಂಬಂಧಪಟ್ಟಿದೆಯಾದರೂ, ಕಸದ ರಾಶಿ ಇದ್ದ ಜಾಗ ವಾರ್ಡ್ ನಂಬರ್ 23ಕ್ಕೆ ಸೇರುತ್ತದೆ ಎಂದು ಸ್ಪಷ್ಪಪಡಿಸಿರುವ ನಾಗರಾಜ್, ಆದರೂ ಈ ಜಾಗವನ್ನು ಸ್ವಚ್ಛ ಮಾಡಿಸಿದ್ದೇನೆ ಎಂದು ತಿಳಿಸಿದ್ದಾರೆ. ಯಾರೂ ಸಹ ಖಾಲಿ ನಿವೇಶನದಲ್ಲಿ ಕಸವನ್ನು ಹಾಕಬಾರದು. ಮನೆ ಮುಂದೆ ಬರುವ ಕಸದ ಆಟೋಗೆ ಕಸ ಹಾಕಬೇಕೆಂದು ನಾಗರಿಕರಲ್ಲಿ ವಿನಂತಿಸಿದ್ದಾರೆ.

error: Content is protected !!