ದಾವಣಗೆರೆ, ಜು.18- ಲಿಂಗೈಕ್ಯರಾದ ರಾಂಪುರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ಶ್ರೀ ವಿಶ್ವೇಶ್ವರ ಹಾಲಸ್ವಾಮಿ ಮಹಾ ಶಿವಾಚಾರ್ಯರಿಗೆ ನಗರದ ರೇಣುಕಾ ಮಂದಿರದಲ್ಲಿ ಜಿಲ್ಲೆಯ ಜಂಗಮ, ಅರ್ಚಕ ಪುರೋಹಿತರು ಲಿಂಗೈಕ್ಯ ಶ್ರೀಗಳ ಸಮಾಜ ಸೇವೆಯೊಂದಿಗೆ ಧರ್ಮ ಜಾಗೃತಿಯನ್ನು ಮೂಡಿಸಿ, ಸಾವಿರಾರು ಭಕ್ತಾದಿಗಳನ್ನು ಅಗಲಿದ್ದಾರೆ ಎಂದು ಅವರ ಸೇವೆ ಸ್ಮರಿಸಿ, ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿ, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಂ.ಚನ್ನಯ್ಯಸ್ವಾಮಿ, ಶಿವಕುಮಾರ ಶಾಸ್ತ್ರಿ, ಬಸವರಾಜಯ್ಯ ಶಾಸ್ತ್ರಿ, ವೀರಯ್ಯ ಸ್ವಾಮಿ, ವಿನಾಯಕ ಶಾಸ್ತ್ರಿ, ಹಾಲಸ್ವಾಮಿ ಮತ್ತಿತರರು ಭಾಗವಹಿಸಿದ್ದರು.