ಕಸ ವಿಲೇವಾರಿ ವಾಹನ ಉದ್ಘಾಟನೆ

ದಾವಣಗೆರೆ, ಜು.6- ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ವ್ಯಾಪ್ತಿಯ ಮಹಾನಗರ ಪಾಲಿಕೆಯ 15ನೇ ವಾರ್ಡಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರ ಪಾಲಿಕೆಯಿಂದ ವಿತರಣೆಯಾಗಿರುವ ಮನೆ ಕಸ ವಿಲೇವಾರಿ ವಾಹನಕ್ಕೆ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್‌ ಅವರು ಪೂಜೆ ಸಲ್ಲಿಸುವುದರ ಮೂಲಕ ನಾಗರಿಕರ ಸೇವೆಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಮಲ್ಲೇಶಪ್ಪ ಮಾತನಾಡಿ, ಸಾಂಕ್ರಾಮಿಕ ರೋಗ ಹರಡದಂತೆ ಜಾಗ್ರತೆ ವಹಿಸಿ, ಎಲ್ಲರೂ ಕಸವನ್ನು ಈ ವಾಹನದಲ್ಲಿ ಹಾಕಿರಿ ಎಂದು ಹೇಳಿದರು. 

ನ್ಯಾಯವಾದಿ ಪ್ರಕಾಶ್‌ ಪಾಟೀಲ್, ಮಂಜುನಾಥ ಕಂಬಳಿ, ಅಬ್ದುಲ್ ಮಜೀದ್‌  ಮಾತನಾಡಿದರು. ಕೆ.ಎಂ. ವೀರಯ್ಯಸ್ವಾಮಿ ವಂದಿಸಿದರು. 

ನಟರಾಜ್, ನಜೀರ್‌ಸಾಬ್‌, ರಾಮಣ್ಣ, ಶಿವಮೂರ್ತಿ, ರಮೇಶ್, ಹಫೀಜ್, ಪ್ರಶಾಂತ್‌ಕುಮಾರ್, ಶ್ರೀಮತಿ ಸುಷ್ಮಾ ಪಾಟೀಲ್, ನಟರಾಜ, ತೀರ್ಥೇಶ್‌, ಪಾಲಿಕೆ ಸಿಬ್ಬಂದಿ ಅಂಜಿನಪ್ಪ, ನಾರಾಯಣಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!