ಮಾಯಕೊಂಡದಲ್ಲಿ ರೈತರ ಪ್ರತಿಭಟನೆ

ಮಾಯಕೊಂಡ, ಜು.6- ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರದಂತೆ ಮತ್ತು ಬಗರ್ ಹುಕ್ಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ರೈತ ಸಂಘದ ರಾಜ್ಯ ಘಟಕದ‌ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ, ನಾಡಕಛೇರಿಯ ಮುಂದೆ ಇಂದು ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್‌ ಲೋಕೇಶ್ ಅವರಿಗೆ‌ ಮನವಿ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಮುಖಂಡರಾದ ಹುಚ್ಚವ್ವನಹಳ್ಳಿ ಪ್ರಕಾಶ್‌, ಕಂಬರಾಜ್, ಧರಣೇಶ್, ರಜಾಕ್, ಹೂವಿನಮಡು ನಾಗರಾಜ್ ಕೋಲ್ಕುಂಟೆ, ಹುಚ್ಚಂಗೆಪ್ಪ  ಮತ್ತಿತರರಿದ್ದರು.

error: Content is protected !!