ಗುರುಪೂರ್ಣಿಮೆ ಸರಳ ಆಚರಣೆ

ಹರಿಹರ, ಜು.5- ನಗರದ ಕೇಶವ ನಗರದ ಪಾಟೀಲ್ ಬಡಾವಣೆಯಲ್ಲಿ ಇರುವ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಶ್ರೀ ಸಾಯಿಬಾಬಾರಿಗೆ ಮತ್ತು ಸತ್ಯನಾರಾಯಣ ಸ್ವಾಮಿ, ಗಣಪತಿ ಸ್ವಾಮಿ, ಕಾಶಿ ವಿಶ್ವನಾಥ ಸ್ವಾಮಿಗೆ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ಮಹಾಮಂಗಳಾರತಿಯನ್ನು ಸರಳವಾಗಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರು ಬಸವರಾಜ್ ಪಾಟೀಲ್, ಲಿಂಗರಾಜ್ ಪಾಟೀಲ್, ಶೇಖರಪ್ಪ ಗೌಡ್ರು ಅಮರಾವತಿ, ಹನುಮಂತಪ್ಪ ಸುರ್ವೆ, ಕುಮಾರ್ ಸ್ವಾಮಿ, ಶಂಕ್ರಯ್ಯ ಸಂಗನಾಳಮಠ, ಮಹಾದೇವಪ್ಪ, ಐರಣಿ ಭೀಮಪ್ಪ, ವಾಗೀಶ್ ಪಾಟೀಲ್ ಇತರರು ಹಾಜರಿದ್ದರು.

error: Content is protected !!