ನಗರಕ್ಕೆ ಎಡಿಜಿಪಿ ಭಾಸ್ಕರ್‌ರಾವ್ ಭೇಟಿ

ದಾವಣಗೆರೆ,ಅ.6- ರಾಜ್ಯದ ಆಂತರಿಕ ಭದ್ರತೆಯ ಎ.ಡಿ.ಜಿ.ಪಿ. ಭಾಸ್ಕರ್ ರಾವ್ ಅವರು ಖಾಸಗಿ ಭೇಟಿಗಾಗಿ ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮುದೇಗೌಡ್ರ ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿದ್ದರು. ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್, ಎಸ್ಪಿ ಹನುಮಂತರಾಯ,  ಮಾಜಿ ಶಾಸಕ ಬಿ.ಪಿ. ಹರೀಶ್, ಮುಖಂಡ ಎನ್.ಜಿ.ಪುಟ್ಟಸ್ವಾಮಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!