ಯಲ್ಲಮ್ಮನಗರದಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತ್ಯೋತ್ಸವ

ದಾವಣಗೆರೆ, ಅ.4- ಸ್ಥಳೀಯ ಯಲ್ಲಮ್ಮ ನಗರದಲ್ಲಿ ಶ್ರೀ ಸಂತ ಶಿಶುನಾಳ ಷರೀಫ್‌ರ ಭಜನಾ ಮಂದಿರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಮಂತ್ರಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಹಾಗೂ ಐಎಸ್‌ಡಿಎಸ್ ಜಯಂತಿ ಆಯೋಜಿಸಲಾಗಿತ್ತು. ಕಾರ್ಯ ಕ್ರಮವನ್ನು ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಉದ್ಘಾಟಿಸಿದರು. ಈ ಭಾಗದ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ಮುಖಂಡರು ಗಳಾದ ರವಿ ಸ್ವಾಮಿ, ನಾಗರಾಜ್ ಗೌಡ ಮತ್ತಿತರರು ಭಾಗವಹಿಸಿದ್ದರು.

error: Content is protected !!