ಜೋಪಡಿಗೆ ಅಧಿಕಾರಿಗಳ ಭೇಟಿ

ದಾವಣಗೆರೆ, ಜೂ.20- ನಗರದ ಪಿ.ಬಿ. ರಸ್ತೆಯಲ್ಲಿರುವ ನರಹರಿ ಶೇಟ್ ಸಭಾ ಭವನದ ಪಕ್ಕದ ನಿವೇಶನದಲ್ಲಿ ವಾಸಿಸುತ್ತಿರುವ ನಿರಾಶ್ರಿತರ ಜೋಪಡಿಗೆ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಶಿವಾನಂದ ದಳವಾಯಿ ಅವರು ಭೇಟಿ ನೀಡಿ, ಜೋಪಡಿಯಲ್ಲಿರುವ ಮಹಿಳೆಗೆ ಹೆರಿಗೆಯಾಗಿರುವ ವಿಷಯ ತಿಳಿದು,  ಮಗುವಿಗೆ ಚುಚ್ಚುಮದ್ದು ಹಾಕಿಸುವಂತೆ ಹಾಗೂ ಸ್ವಚ್ಛತೆ ಬಗ್ಗೆ ಆಪ್ತ ಸಮಾಲೋಚನೆ ಮಾಡಿ, ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸುವಂತೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಬಾಣಂತಿ ಹಾಗೂ ಮಗುವಿಗೆ ಬೇಬಿ ಸೋಪು, ಪೌಡರ್ ಮತ್ತು ದಿನಸಿ ಕಿಟ್‍ಗಳನ್ನು ವಿತರಿಸಿದರು. ಈ ವೇಳೆ ಫಾರ್ಮಸಿ ಅಧಿಕಾರಿಗಳಾದ ಎ.ಕೆ. ಪ್ರಭುದೇವ, ಸುಜಾತ ಹಾಗೂ ವೀಣಾ ಇದ್ದರು.

error: Content is protected !!