ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಮಾಸ್ಕ್ ವಿತರಿಸಿ ಜಾಗೃತಿ

ದಾವಣಗೆರೆ, ಜೂ.20- ಮಾಸ್ಕ್ ಡೇ ದಿನಾಚರಣೆ ಅಂಗವಾಗಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ನಿನ್ನೆ ಜಾಗೃತಿ ಜಾಥಾ ನಡೆಸಿ, ಜನತೆಗೆ ಮಾಸ್ಕ್‌ಗಳನ್ನು ವಿತರಿಸಲಾಯಿತು. 

ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಹೊರಟ ಜಾಥಾವು ರಾಜ ಬೀದಿಗಳಲ್ಲಿ ಸಂಚರಿಸಿತು. ರಸ್ತೆಯ ಉದ್ದಕ್ಕೂ ಮಾಸ್ಕ್‌ ಗಳನ್ನು ವಿತರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಶಾಸಕ ಎಸ್.ಎ. ರವೀಂದ್ರನಾಥ್ ಜಾಥಾಕ್ಕೆ ಚಾಲನೆ ನೀಡಿ, ಸ್ವತಃ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಉಪ ಮಹಾಪೌರರಾದ ಸೌಮ್ಯ ನರೇಂದ್ರಕುಮಾರ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉತ್ತರದ ಅಧ್ಯಕ್ಷ ಸಂಗನ ಗೌಡ್ರು, ದಕ್ಷಿಣದ ಅಧ್ಯಕ್ಷ ಆನಂದ್ ರಾವ್ ಶಿಂಧೆ, ಖಜಾಂಚಿ ವೀರೇಶ್, ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿ ಲಿಂಗರಾಜ್ ಗೌಳಿ, ನಗರ ಪಾಲಿಕೆ ಸದಸ್ಯರಾದ ವೀರೇಶ್ ಪೈಲ್ವಾನ್, ಶಿವನಗೌಡ ಪಾಟೀಲ್, ಮಂಜು ನಾಯಕ, ಶಿವಪ್ರಕಾಶ್, ಪಕ್ಷದ ಮುಖಂಡರುಗಳಾದ ಮುಕುಂದಪ್ಪ, ಮಾಜಿ ಮೇಯರ್ ವಸಂತ್, ಮಂಜುಳಾ ಮಹೇಶ್, ಸರ್ವಮಂಗಳಮ್ಮ, ಶಾಂತ ದೊರೆ, ಜಯಮ್ಮ, ಜ್ಯೋತಿ ಲಕ್ಷ್ಮಿ, ಶಾರದಾ ರಾಯ್ಕರ್, ಶಿವು, ತರಕಾರಿ ಶಿವು, ಉಮೇಶ್ ಪಾಟೀಲ್, ಶಾಮನೂರು ರಾಜಣ್ಣ, ವಾಸು ಸಾಕ್ರೆ, ಅಡಾನಿ ಸಿದ್ದಪ್ಪ, ರಾಜೇಶ್, ಶ್ರೀನಿವಾಸ್, ಬಸವರಾಜಯ್ಯ, ಜಿಲ್ಲಾ ಮಾಧ್ಯಮ ಪ್ರಮುಖ ಎಚ್.ಪಿ. ವಿಶ್ವಾಸ್  ಮತ್ತಿತರರು ಭಾಗವಹಿಸಿದ್ದರು.

error: Content is protected !!