ರಾಣೇಬೆನ್ನೂರು ಎಪಿಎಂಸಿ ಕಾರ್ಯದರ್ಶಿ ಅಸಹಕಾರ : ಧರಣಿ

ರಾಣೇಬೆನ್ನೂರು,ಮೇ 20- ಇಲ್ಲಿನ ಎಪಿಎಂಸಿ ಕಾರ್ಯದರ್ಶಿ ಸತೀಶ್ ಕುಮಾರ್ ಅವರು ಆಡಳಿತ ಮಂಡಳಿ ಹಾಗೂ ವರ್ತಕರ ಜೊತೆ ಅಸಹಕಾರದಿಂದ ನಡೆದುಕೊಳ್ಳುತ್ತಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಪಕ್ಷಬೇದ ಮರೆತು ಎಲ್ಲರೂ ಒಂದಾಗಿ ಕಾರ್ಯಾಲಯದ ಎದುರು ಇಂದು ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ವರ್ತಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಬೆಂಬಲಿಸಿದರು.

error: Content is protected !!