`ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ’ ಹೊಸ ನಾಮಫಲಕ ಅಳವಡಿಕೆ

ಮಲೇಬೆನ್ನೂರು, ನ. 18- ಭಾನುವಳ್ಳಿ ಗ್ರಾಮದ ಏಕಲವ್ಯ ಯುವಕ ಸಂಘದ ವತಿಯಿಂದ ವಾಲ್ಮೀಕಿ ಜಯಂತಿಯ ಪ್ರಯುಕ್ತ ಭಾನುವಳ್ಳಿ ಗ್ರಾಮದ ಮದಕರಿನಾಯಕ ವೃತ್ತದ ಬಳಿ ಇರುವ ಹಳೆ ನಾಮಫಲಕವನ್ನು ತೆರವುಗೊಳಿಸಿ ಆದಿಕವಿ  `ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ’
ಎಂಬ ಹೊಸ ನಾಮಫಲಕವನ್ನು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ  ಗ್ರಾ.ಪಂ.  ಅಧ್ಯಕ್ಷೆ ನೇತ್ರಾವತಿ ಕೊಟ್ರೇಶ್, ಉಪಾಧ್ಯಕ್ಷ ಕೆ.ಚಂದ್ರಪ್ಪ, ಸದಸ್ಯರಾದ ಟಿ.ಪಿ. ಧನ್ಯಕುಮಾರ್, ಶಿವರಾಜ್,  ಬಿ.ಚಂದ್ರಪ್ಪ, ಮಂಜುಳ ವೀರೇಶ್, ಗಿರಿಜಮ್ಮ ಜಯಪ್ಪ, ಮಹೇಶ್ವರಪ್ಪ ಮತ್ತು ಸಮಾಜದ ಮುಖಂಡರಾದ ನಿವೃತ್ತ ಶಿಕ್ಷಕರಾದ ಪುಟ್ಟಪ್ಪ, ಟಿ.ಆರ್.ಮಹೇಶ್ವರಪ್ಪ, ರಂಗನಾಥ್ ದೊಡ್ಡಮನಿ, ಪ್ರಕಾಶ್ ಡಿ,  ಮಹಾಂತೇಶಪ್ಪ, ಚಂದ್ರಪ್ಪ ಕಡೇಮನಿ, ಗೋವಿಂದ್ ಹಾಗೂ  ಪಿಡಿಓ  ನಾಗರಾಜ್ ಸಾರಥಿ, ಕಾರ್ಯದರ್ಶಿ ಉಮೇಶ್,  ಲೆಕ್ಕ ಸಹಾಯಕ ಟಿ.ಆರ್.  ಶಿವಪ್ಪ ಮತ್ತಿತರರು ಹಾಜರಿದ್ದರು.

error: Content is protected !!