ಹರಪನಹಳ್ಳಿ : ಎಸ್ಸೆಸ್ಸೆಲ್ಸಿ ಪರೀಕ್ಷಾ ನಿಮಿತ್ತ ಫೋನ್‌ಇನ್ ಕಾರ್ಯಕ್ರಮ

ಹರಪನಹಳ್ಳಿ, ಮಾ.28- ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ರಾಜ ಸೋಮಶೇಖರ ನಾಯಕ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಫೋನ್‌ಇನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ ಅವರ ನೇತೃತ್ವದಲ್ಲಿ ‘ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ’ ಶೀರ್ಷಿಕೆಯಡಿ ರಾಜ್ಯದಲ್ಲಿಯೇ ತಾಲ್ಲೂಕು ಹಂತದಲ್ಲಿ ಹರಪನಹಳ್ಳಿಯಲ್ಲಿ ಪ್ರಪ್ರಥಮವಾಗಿ ಈ ವಿನೂತನ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಗಿದೆ. ತಾಲ್ಲೂಕಿನ 62 ಪ್ರೌಢಶಾಲೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮಕ್ಕಳು ಪಠ್ಯಪುಸ್ತಕದಲ್ಲಿನ ಕ್ಲಿಷ್ಟ ಪರಿಕಲ್ಪನೆಗಳನ್ನು ಫೋನ್‌ ಮೂಲಕ ವಿಷಯ ತಜ್ಞರ ಜೊತೆ ನೇರವಾಗಿ ಕೇಳಿ ಪರಿಹರಿಸಿಕೊಂಡರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ರಾಮಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಗಿರಜ್ಜಿ ಮಂಜುನಾಥ್, ದಯಾನಂದ, ವೀರೇಂದ್ರ, ಲಿಂಗರಾಜ್, ಕೊಟ್ರೇಶ್, ಗಣೇಶ್, ಮಹೇಶ್ ಪೂಜಾರ್, ಕಬೀರ್ ನಾಯ್ಕ, ಜಯ ಮಾಲತೇಶ್ ಇನ್ನಿತರರಿದ್ದರು.

error: Content is protected !!