ಮರಾಠ ಸಮಾಜದಿಂದ ವಧು-ವರರ ಸಮಾವೇಶ

ದಾವಣಗೆರೆ, ಮಾ.25- ನಗರದ ಶ್ರೀ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ರಾಜ್ಯ ಮಟ್ಟದ 3ನೇ ವಧು-ವರರ ಮುಖಾ-ಮುಖಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಸುರೇಂದ್ರರಾವ್‍ ದೇವದಾಸ್‍ ಮತ್ತು ಮಂಜೋಜಿರಾವ್‍ ಗಾಯಕವಾಡ ನಡೆಸಿಕೊಟ್ಟರು. ಶ್ರೀಮತಿ ಚೇತನಾ ಶಿವಕುಮಾರ್‍ ಸ್ವಾಗತಿಸಿದರು. ವಿಠೋಬರಾವ್‌ ನಲ್ಲೋಡೆ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಷಹಾಜಿ ಮಹಾರಾಜ್‍ ಭೋಸ್ಲೆಯವರ 427ನೇ ಜಯಂತ್ಯೋತ್ಸವದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಲಾಯಿತು. 

ಸಮಾವೇಶದ  ಅಧ್ಯಕ್ಷತೆ ವಹಿಸಿದ್ದ ಮರಾಠ ಸಮಾಜದ ಅಧ್ಯಕ್ಷ ಡಿ. ಮಾಲತೇಶ್‍ರಾವ್ ಜಾಧವ್‍ ಮಾತನಾಡಿ, ವರದಕ್ಷಿಣೆ ತೆಗೆದುಕೊಳ್ಳದೇ ವಿವಾಹವನ್ನು ಮಾಡಿಕೊಳ್ಳಬೇಕೆಂದು ಸೂಚಿಸಿದರು.

 ಕಾರ್ಯಕ್ರಮದ ರೂವಾರಿ ಎನ್.ಎಸ್‍ ಕೃಷ್ಣರಾವ್ ಸಾವಂತ್ ಪ್ರಾಸ್ತಾವಿಕವಾಗಿ ಮಾತನಾಡಿ,  ಈ ಸಮಾ ವೇಶದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹಗಳು ಯಶಸ್ವಿಯಾಗಿ ನೆರವೇರಲೆಂದು ಆಶಿಸಿದರು.

ಎನ್.ಎಸ್‍. ಕೃಷ್ಣರಾವ್‍ ಸಾವಂತ್‍ರವರ ಕಿರು ಪರಿಚಯವನ್ನು ಬಿ. ಗುರುಮೂರ್ತಿಯವರು ಮಾಡಿಕೊಟ್ಟರು. ಅಜ್ಜಪ್ಪ ಪವಾರ್, ವೈ. ಮಲ್ಲೇಶ್‍ ಶಿಂಧೆ, ಜಿ.ಹೆಚ್‍. ಮರೋಜಿರಾವ್‍ ಮಾತನಾಡಿದರು. ಶ್ರೀಮತಿ ಗೌರಬಾಯಿ ಮೋಹಿತೆ, ಶ್ರೀಮತಿ ಅನುಸೂಯ ಬಾಯಿ ಜಾಧವ್ ಉಪಸ್ಥಿತರಿದ್ದರು.

error: Content is protected !!