ಕೋಟೆ ಮಲ್ಲೂರು ವೀರಭದ್ರೇಶ್ವರ ರಥೋತ್ಸವ

ಹೊನ್ನಾಳಿ, ಮಾ.25- ತಾಲ್ಲೂ ಕಿನ ಕೋಟೆಮಲ್ಲೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡದಾ ರ್ಚನೆ, ಮಹಾರಥೋತ್ಸವ ನಡೆಯಿತು. 

ಭಕ್ತರು ರಥಕ್ಕೆ ಮಂಡಕ್ಕಿ, ಬಾಳೆಹಣ್ಣು, ಮೆಣಸಿನಕಾಳು, ಉತ್ತತ್ತಿ ಎಸೆಯುವುದರ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ತಾಲ್ಲೂಕಿನ ಅರಕೆರೆ ಗ್ರಾಮದ ಹೊನ್ನೆತ್ತಮ್ಮ, ಕೋಟೆ ಮಲ್ಲೂರಿನ ದುರ್ಗಾಮಾತೆ, ಬೀರಲಿಂಗೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಬಳೆಲಿಂಗೇಶ್ವರ ಸ್ವಾಮಿ ಹಾಗೂ ವೀರಭದ್ರೇಶ್ವರ ಸ್ವಾಮಿ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಬಸವರಾಜಯ್ಯ, ಕರೆಮಣ್ಣಾರ ಸಿದ್ದಪ್ಪ, ಮೈಲಪ್ಪರ ಭದ್ರಪ್ಪ ಮತ್ತು ಮಕ್ಕಳಿಂದ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಮಹೇಶ್ವರಪ್ಪ, ಶಾಂತ ವೀರಪ್ಪ, ರುದ್ರಮ್ಮ, ಬಿ.ಸಿ. ರಾಜಪ್ಪ ಗೌಡ್ರು, ಪರಮೇಶ್ವರಪ್ಪ ಗೌಡ್ರು, ನಿಂಗಪ್ಪ, ಬಸಪ್ಪ, ಅಣ್ಣಪ್ಪ, ಹನುಮಂತಪ್ಪ, ಕಮಲಮ್ಮ, ಹಾಲೇಶಪ್ಪ, ಗೀತಾ ಮಹೇಶ್ವರಪ್ಪ ಇನ್ನಿತರರಿದ್ದರು.

error: Content is protected !!