ಎಸ್‌.ಎಸ್‍.ಹೈಟೆಕ್‍ ಆಸ್ಪತ್ರೆಯಲ್ಲಿ ಜಾಗತಿಕ ಸ್ತನ್ಯಪಾನ ಸಪ್ತಾಹ

ದಾವಣಗೆರೆ, ಆ.5 – ನಗರದ ಎಸ್.ಎಸ್.ಐ.ಎಂ.ಎಸ್ ವೈದಕೀಯ ಕಾಲೇಜಿನಲ್ಲಿ ಜಾಗತಿಕ ಸ್ತನ್ಯಪಾನ ಸಪ್ತಾಹ ನಡೆಯಿತು. ಪ್ರಾಂಶುಪಾಲ ಡಾ|| ಬಿ.ಎಸ್. ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.

ಸಪ್ತಾಹದ ಅಂಗವಾಗಿ ನರ್ಸಿಂಗ್‍ ಸಿಬ್ಬಂದಿಯವರಿಗೆ ಹಾಗೂ ತಾಯಂದಿರಿಗೆ ಡಾ|| ವೀರೇಶ್ ಬಾಬುರವರು ಎದೆಹಾಲಿನ ಮಹತ್ವದ ಬಗ್ಗೆ ತಿಳಿಸಿದರು.

ಡಾ|| ವಿನಯಕುಮಾರ್‍ ಐ.ಎಂ.ಎಸ್ ಆಕ್ಟ್ ಬಗ್ಗೆ ವಿವರಿಸಿದರು. ಡಾ|| ಲತಾ ಜಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ವಾರ ಪೂರ್ತಿ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

error: Content is protected !!