ಮಾಜಿ ಸಚಿವ ತುಕಾರಾಮ್‌ಗೆ ಸನ್ಮಾನ

ಹರಪನಹಳ್ಳಿ, ಜೂ.27 – ಮಾಜಿ ಸಚಿವರೂ ಆದ ಸಂಡೂರು ಶಾಸಕ ಇ.ತುಕರಾಮ್ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಪಟ್ಟಣದ ತೆಗ್ಗಿನ ಮಠಕ್ಕೆ ಇಂದು ಭೇಟಿ ನೀಡಿದ್ದರು. ಈ ವೇಳೆ ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರು ಶಾಸಕ ತುಕಾರಾಮ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ತೆಗ್ಗಿನಮಠ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ, ವಕೀಲ ಟಿ.ವೆಂಕಟೇಶ, ಮುಖಂಡರಾದ ಇರ್ಫಾನ್ ಮುದುಗಲ್, ತೆಲಿಗಿ ಟಿ.ಉಮಾಕಾಂತ್, ಟಿ.ಮಂಜುನಾಥ, ಮಹಾಂತೇಶ್ ನಾಯ್ಕ್, ಜಿಸಾನ್, ಎಂ.ದಾದಾಪೀರ್ ಸೇರಿದಂತೆ ಇತರರು ಇದ್ದರು.

error: Content is protected !!