ಜಿಎಂಐಟಿಯಲ್ಲಿ ಸೌರಶಕ್ತಿಯ ಕೌಶಲ್ಯಗಳ ಮಾಹಿತಿ ಕಾರ್ಯಾಗಾರ

ದಾವಣಗೆರೆ, ಮಾ. 24- ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲೆಯ ವಿವಿಧ ಐಟಿಐ ಕಾಲೇಜ್ ಮತ್ತು ಪಾಲಿಟೆಕ್ನಿಕ್ ಮೇಲ್ವಿಚಾರಕರುಗಳಿಗೆ ಸೌರಶಕ್ತಿ ಬಳಕೆ ಮಾಡುವ ತಂತ್ರಜ್ಞಾನ ಮತ್ತು ಕೌಶಲ್ಯಗಳ ಮೇಲೆ ಎರಡು ದಿನಗಳ ಕಾರ್ಯಾಗಾರವನ್ನು ಎಂಜಿಐಆರ್‌ಡಿ  ಬೆಂಗಳೂರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ದಾವಣಗೆರೆ. ಸರ್ಕಾರಿ ಐಟಿಐ ಕಾಲೇಜ್ ದಾವಣಗೆರೆ ಮತ್ತು ಎಂಎಆರ್‌ಎಸ್ಎಸ್-ಕೆ ಇವರ ಸಹಯೋಗದಿಂದ ಹಮ್ಮಿಕೊಳ್ಳಲಾಗಿತ್ತು.

ಜಿ.ಎಂ.ಐ.ಟಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಕುಮಾರ್ ಮತ್ತಿತರರು ಕಾರ್ಯಾಗಾರ ನಡೆಸಿಕೊಟ್ಟರು.

ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಪ್ರತಿನಿಧಿ ವೈ.ಯು. ಸುಭಾಷ್‌ಚಂದ್ರ, ಪ್ರಾಂಶುಪಾಲ ಡಾ. ವೈ.ವಿ ಜಯಕುಮಾರ್, ಮೆಕ್ಯಾನಿಕಲ್ ವಿಭಾಗದ  ಮುಖ್ಯಸ್ಥ ಡಾ. ಸಿ.ವಿ. ಶ್ರೀನಿವಾಸ್  ಭಾಗವಹಿಸಿದ್ದರು. ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ಎನ್. ಏಕಾಂತ, ಎಂಎಆರ್‌ಎಸ್ಎಸ್-ಕೆ  ಪ್ರಾಜೆಕ್ಟ್ ಡೈರೆಕ್ಟರ್ ಎ. ಹುಲಿಗೇಶ್ ಪ್ರಾಜೆಕ್ಟ್ ಡೈರೆಕ್ಟರ್ ಮತ್ತಿತರರು  ಉಪಸ್ಥಿತರಿದ್ದರು.

error: Content is protected !!