ಕೂಡ್ಲಿಗಿ, ಮಾ.14- ವಿಜಯನಗರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಕೂಡ್ಲಿಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ. ಬಸವರಾಜ್ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಹಡಗಲಿ ದ್ಯಾಮಜ್ಜ, ಪ್ರಧಾನ ಕಾರ್ಯದರ್ಶಿ ಅರ್ಜುನ್ ಮನ್ನಾಪುರ, ಕೋಶಾಧ್ಯಕ್ಷ ಹೊಸಪೇಟೆ ನಿರಂಜನ್, ಪ್ರಧಾನ ಸಂಘಟನಾ ಕಾರ್ಯದರ್ಶಿ ಕೊಟ್ಟೂರಿನ ಜಿ. ಚಿತ್ತರಂಜನ್, ಉಪಾಧ್ಯಕ್ಷ ಡಾ. ದಯಾನಂದ ಕಿನ್ನಾಳ್, ಕಾರ್ಯದರ್ಶಿ ಹಗರಿಬೊಮ್ಮನಹಳ್ಳಿಯ ಗೂಳೆಪ್ಪ, ಗೌರವಾಧ್ಯಕ್ಷ ಡಾ.ಅಬ್ದುಲ್ ಸಮದ್ ಹಾಗೂ ಕಾನೂನು ಸಲಹೆಗಾರರಾಗಿ ಹಗರಿಬೊಮ್ಮನಹಳ್ಳಿ ಚಂದ್ರನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.
July 26, 2024