ಸಿಎಂ ಆಗಿ ಬನ್ನಿ ಎಂದು ಆಶೀರ್ವದಿಸಿದ್ದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್

ಹಡಗಲಿ, ಜು.28- ಹಲವು ದಿನಗಳ ಹಿಂದೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮೈಲಾರಕ್ಕೆ ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ದೇವಸ್ಥಾನದಲ್ಲಿ ವಂಶ ಪಾರಂಪರ್ಯ ಧರ್ಮಕರ್ತರಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಆಶೀರ್ವಾದ ಮಾಡಿ, ಮುಂದಿನ ಬಾರಿ ತಾವು ಮೈಲಾರಕ್ಕೆ ಬರುವಾಗ ಮುಖ್ಯಮಂತ್ರಿಯಾಗಿ ಬನ್ನಿ ಎಂದು ಆಶೀರ್ವದಿಸಿದ್ದರು. ಅದರಂತೆ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹಡಗಲಿ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

error: Content is protected !!