ಮಲೇಬೆನ್ನೂರು ತಲುಪಿದ ಭದ್ರಾ ನೀರು

ಮಲೇಬೆನ್ನೂರು, ಜು.28- ಭದ್ರಾ ಜಲಾಶಯದಿಂದ ಅಚ್ಚುಕಟ್ಟಿನ ಮುಂಗಾರು ಹಂಗಾಮಿನ ಬೆಳೆಗಳಿಗಾಗಿ ಬಲದಂಡೆ ನಾಲೆಗೆ 2 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುತ್ತಿದ್ದು, ಬುಧವಾರ ಬೆಳಿಗ್ಗೆ ಮಲೇಬೆನ್ನೂರು ಭಾಗದ ಕಾಲುವೆಗಳಲ್ಲಿ ಆಗಮಿಸಿತು. ಭತ್ತದ ಸಸಿ ಮಡಿ ಬೆಳೆಸುವವರಿಗೆ ಮತ್ತು ಈಗಾಗಲೇ ಸಸಿ ಮಡಿ ಬೆಳೆಸಿಕೊಂಡಿರುವ ರೈತರು ರೊಳ್ಳಿ ಹೊಡೆದು, ನಾಡಿ ಮಾಡಲು ಈ ನೀರು ಅನುಕೂಲವಾಗಲಿದೆ.

error: Content is protected !!