ಹಳೇಕುಂದುವಾಡ : 9 ದಿನ ಶಿವರಾತ್ರಿ ವಿಶೇಷ ಪೂಜೆ

ದಾವಣಗೆರೆ, ಮಾ. 11- ಹಳೇಕುಂದುವಾಡ ಗ್ರಾಮದಲ್ಲಿರುವ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 9 ದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳು ಗುರುವಾರದಿಂದ ಆರಂಭಗೊಂಡಿವೆ. ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದ ಧರ್ಮಾಧಿಕಾರಿ ಜೆ. ರಾಜಣ್ಣ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಧ್ವಜಾರೋಹಣ ನೆರವೇರಿತು. 

ಈ ಸಂದರ್ಭದಲ್ಲಿ ಮೇಯರ್ ಎಸ್.ಟಿ. ವೀರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ, ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಹೆಚ್. ವಿಶ್ವನಾಥ್, ಮಾಜಿ ಮೇಯರ್ ಗುರುನಾಥ್, ಕೆಂಪನಿಂಗಪ್ಪರ್ ಮಂಜಪ್ಪ, ಎರೇಹಳ್ಳಿ ಕರಿಬಸಪ್ಪ, ಗೌಡ್ರು ಬಸವರಾಜಪ್ಪ, ಕೆ. ಸಿದ್ದಪ್ಪ, ಎಂ. ವೆಂಕಟೇಶಪ್ಪ, ಸಂಗನಗೌಡ್ರು ಮತ್ತಿತರರು ಉಪಸ್ಥಿತರಿದ್ದರು.

error: Content is protected !!