ಮಲೇಬೆನ್ನೂರು : ವಿನಾಯಕ ನಗರ ಕ್ಯಾಂಪ್‌ನಲ್ಲಿ ಅನ್ನ ಸಂತರ್ಪಣೆ

ಮಲೇಬೆನ್ನೂರು : ವಿನಾಯಕ ನಗರ ಕ್ಯಾಂಪ್‌ನಲ್ಲಿ ಅನ್ನ ಸಂತರ್ಪಣೆ - Janathavaniಮಲೇಬೆನ್ನೂರು, ಮಾ.11- ವಿನಾಯಕ ನಗರ ಕ್ಯಾಂಪಿನಲ್ಲಿರುವ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆದವು. ಹಬ್ಬದ ಪ್ರಯುಕ್ತ ಅನ್ನ ಸಂತರ್ಪಣೆ ಏರ್ಪಡಿಸಲಾಗಿದ್ದು ಕುಂಬಳೂರು, ವಿನಾಯಕ ನಗರ ಕ್ಯಾಂಪ್, ಜಿಗಳಿ, ನಂದಿತಾವರೆ, ಭಾನುವಳ್ಳಿ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಭದ್ರಾಮಣ್ಣನವರ ಪುತ್ರಿ ಅನುಷಾ ಚಂದ್ರಶೇಖರ್ ದಾಸೋಹ ದಾನಿಗಳಾಗಿದ್ದರು.

ಕುಂಬಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ. ಪರಶುರಾಮಪ್ಪ, ಹನುಮಂತಪ್ಪ, ಕ್ಯಾಂಪಿನ ಸಿ.ಹೆಚ್. ಪ್ರಸಾದ್, ಎಂ. ನಾಗೇಶ್ವರ ರಾವ್, ಕೊತ್ತಕಲಿ ಶ್ರೀನಿವಾಸ್, ಗ್ರಾ.ಪಂ. ಸದಸ್ಯ ಬಿ. ಶ್ರೀನಿವಾಸ್, ಮಾಜಿ ಸದಸ್ಯ ಎನ್. ಪ್ರಸಾದ್ ರಾವ್, ಮಕ್ಕಳ ತಜ್ಞ ಡಾ. ಶ್ರೀನಿವಾಸ್, ಎಂ. ನಾನಿ, ಕುಂಬಳೂರು ಗ್ರಾ.ಪಂ. ಉಪಾಧ್ಯಕ್ಷ ಹನುಮಂತಪ್ಪ, ಜಿಗಳಿಯ ಜಿ. ಆನಂದಪ್ಪ, ಕೆ.ಎಸ್. ನಂದ್ಯೆಪ್ಪ ಇನ್ನಿತರರು ಭಾಗವಹಿಸಿದ್ದರು.

error: Content is protected !!