ಕೂಡ್ಲಿಗಿ: ಪ್ರಸಿದ್ಧ ಪರ್ವ ಪುಸ್ತಕ ಬಿಡುಗಡೆ

ಕೂಡ್ಲಿಗಿ, ಮಾ.6- ಪಟ್ಟಣದ ಎಸ್‌ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭೂದಾನಿ ಹಾಗೂ ಶಿಕ್ಷಕರಾಗಿದ್ದ ದಿ. ಅಂಗಡಿ ಸಿದ್ದಣ್ಣನವರ ಜೀವನ ಚರಿತ್ರೆಯಾದ ಪ್ರಸಿದ್ಧ ಪರ್ವ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ವಹಿಸಿ ಆಶೀರ್ವಚನ ನೀಡಿದರು. ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ಉಪಸ್ಥಿತರಿದ್ದರು. ಸಂಸದ ವೈ. ದೇವೇಂದ್ರಪ್ಪ, ತಹಶೀಲ್ದಾರ್ ಎಸ್. ಮಹಾಬಲೇಶ್ವರ್, ಸಿಪಿಐ ವಸಂತ ಅಸೋದೆ, ಕೆ.ಎಂ. ತಿಪ್ಪೇಸ್ವಾಮಿ, ಹಿರಿಯ ವಕೀಲ ಎಂ.ಎಂ.ಜೆ. ಸ್ವರೂಪಾನಂದ, ನೌಕರರ ಸಂಘದ ಪಿ. ಶಿವುರಾಜ್ ಮಾತನಾಡಿದರು.

ಪ.ಪಂ. ಅಧ್ಯಕ್ಷೆ ಎಂ. ಶಾರದಾಬಾಯಿ, ತಾ.ಪಂ. ಅಧ್ಯಕ್ಷೆ ನಾಗರತ್ನಮ್ಮ, ವೀರನಗೌಡ್ರು, ಲೇಖಕ ಕೆ.ಎಂ. ವೀರೇಶ್  ವೇದಿಕೆಯಲ್ಲಿದ್ದರು. ಸಿದ್ದಣ್ಣನವರ ಹಿರಿಯ ಪುತ್ರ, ಪತ್ರಕರ್ತ ವೀರೇಶ್ ಅಂಗಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಿರಿಯ ಪುತ್ರ ಅಂಗಡಿ ಶಿವರಾಜ್ ಸ್ವಾಗತಿಸಿದರು. ಶಿಕ್ಷಕಿ ಬಿ. ಚೌಡಮ್ಮ ಪ್ರಾರ್ಥಿಸಿದರು. ಕೆ.ಎಂ. ವೀರೇಶ್ ನಿರೂಪಿಸಿ, ವಂದಿಸಿದರು. ರಂಗ ಕಲಾವಿದರು, ಶಿಕ್ಷಕರು, ಸಿದ್ದಣ್ಣ ಮೇಷ್ಟ್ರು ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

error: Content is protected !!