ಮೇಘಶ್ರೀ, 3 ಚಿನ್ನದ ಪದಕಗಳೊಂದಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಥಮ

ದಾವಣಗೆರೆ, ಮಾ. 1 – ಎಂ.ಎಸ್ಸಿ (ಅಗ್ರಿ) ಸ್ನಾತಕೋತ್ತರ ಪದವಿಯಲ್ಲಿ ನಗರದ ಕು|| ಮೇಘಶ್ರೀ ಎಸ್. ಪಾಟೀಲ್‌ ಅವರು ಮೂರು ಚಿನ್ನದ ಪದಕಗಳೊಂದಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಮೇಘಶ್ರೀ ಅವರಿಗೆ ಚಿನ್ನದ ಪದಕಗಳೊಂದಿಗೆ ಪದವಿ ಪ್ರದಾನ ಮಾಡಿದರು.

ಮೇಘಶ್ರೀ, ಸ್ಥಳೀಯ ಸರ್ಕಾರಿ ಸಾರ್ವಜನಿಕ ಅಭಿಯೋಜಕ ಎಸ್.ವಿ. ಪಾಟೀಲ್‌ ಮತ್ತು ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿ ಶ್ರೀಮತಿ ಗೌರಮ್ಮ ದಂಪತಿ ಪುತ್ರಿ.

error: Content is protected !!