ವರುಣ್‌ಗೆ `ಬಾಲ ಗೌರವ’ ಪ್ರಶಸ್ತಿ

ದಾವಣಗೆರೆ, ಮಾ. 5- ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ವರುಣ್ ವಿ. ಗೌಡ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಇತ್ತೀಚೆಗೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ 2021ನೇ ಸಾಲಿನ ಬಾಲ ಗೌರವ ಪ್ರಶಸ್ತಿ ಲಭಿಸಿದೆ.

ವರುಣ್, ನಗರ ನಿವಾಸಿ ವೆಂಕಟೇಶ್ ಮತ್ತು ಸರಸ್ವತಿ ದಂಪತಿಯ ಪುತ್ರನಾಗಿದ್ದು, ತನ್ನ 8ನೇ ವಯಸ್ಸಿನಿಂದಲೂ ಕರ್ನಾಟಕದ ವಿವಿಧೆಡೆ ವಿವಿಧ ಕಾರ್ಯಕ್ರಮ ನೀಡಿರುತ್ತಾನೆ.

error: Content is protected !!